ಆಕಾಶದಲ್ಲೂ ?ಲೈಫು ಇಷ್ಟೇನೇ?
Posted date: 18/May/2011

ಆಕಾಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ’ಲೈಫು ಇಷ್ಟೇನೇ’ ಮಾತಿನ ಭಾಗದ ಕೆಲಸ ಪ್ರಾರಂಭವಾಗಿದೆ. ಮಾತಿನ ಭಾಗ ಚಿತ್ರೀಕರಣ ಮುಗಿಸಿದ ತಂಡ ೩ ಹಾಡುಗಳ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದೆ.
ನಿರ್ದೇಶಕ ಯೋಗರಾಜ್ ಭಟ್ ಅವರ ಕಥೆ ಚಿತ್ರಕಥೆ ವಿಭಾಗದಲ್ಲಿ ಹೆಸರು ಪಡೆದಿರುವ ಪವನ್ ಕುಮಾರ್ ಚೊಚ್ಚಲ ನಿರ್ದೇಶನದ ಈ ಚಿತ್ರ ಯುವ ಜನಾಂಗದಲ್ಲಿ ತಲ್ಲಣಿಸುವ, ತಮಾಷೆಯಿಂದ ಕೂಡಿ ಬರುವ ಸಂದರ್ಭಗಳನ್ನೆ ಇಟ್ಟುಕೊಂಡು ಕಥಾ ನಿರೂಪಣೆ ಮಾಡಲಾಗಿದೆ. ಸಿರೀಯಸ್ ಹಾಗೂ ಕಾಮಿಡಿಗೆ ಒತ್ತು ಕೊಟ್ಟಿರುವ ನಿರ್ದೇಶಕರು ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದಾರೆ.

ದಿಗಂತ್ ಮನಸಾರೆ ಸಂತೋಷಪಟ್ಟು ’ಪಂಚರಂಗಿ’ಗಿಂತ ಹೊಸ ಪಾತ್ರದಲ್ಲಿ ಅಭಿಸಯಿಸಿದ್ದಾರೆ. ಸಂಯುಕ್ತಾ ಹೊರನಾಡು ಹಾಗೂ ಸಿಂಧು ಈಗಿನ ಕಾಲದ ಯುವತಿಯರನ್ನು ಹೋಲುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜ್ಞಾನೇಶ್ ಅವರ ಛಾಯಾಗ್ರಹಣ, ಮನೋಮೂರ್ತಿ ಅವರ ಸಂಗೀತವಿರುವ ಈ ಚಿತ್ರದ ನಿರ್ಮಾಪಕರುಗಳು ಸಯ್ಯದ್ ಸಲಾಮ್ ಪಾಶಾ, ಯೋಗರಾಜ್ ಭಟ್, ಮಂಜುನಾಥ್ ಹಾಗೂ ಉಪೇಂದ್ರ ಶೆಟ್ಟಿ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed